ಈ ಟೀಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಮಿತ್ ಶಾ ಅವರು ಹಿಂದುವೋ ಅಲ್ಲವೋ ಎಂಬುದನ್ನು ಹೇಳಲಿ.ಅಮಿತ್ ಶಾ ಅವರು ಜೈನರು. ಅವರು ಅಹಿಂದುವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಜೈನ್ ಎಂಬುದು ಪ್ರತ್ಯೇಕ ಧರ್ಮ, ಅವರು ನನ್ನ ಬಗ್ಗೆ ಮಾತನಾಡುವುದೇನಿದೆ? ಶಾ ಅವರು ನನಗೆ ಹೆದರುತ್ತಾರೆ, ಹಾಗಾಗಿ ಅವರು ನನ್ನ ಮೇಲೆ ವ್ಯಥಾರೋಪ ಮಾಡುತ್ತಿದ್ದಾರೆ ಎಂದಿದ್ದಾರೆ ಸಿದ್ದರಾಮಯ್ಯ.