ನವದೆಹಲಿ: ಕಾಂಗ್ರೆಸ್ ಆಡಳಿತ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸಗಢದಲ್ಲಿ ರೈತರ ಸಾಲ ಮನ್ನಾ ಎಂಬುದು ರಾಜಕೀಯ ತಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಸಾಲ ಮನ್ನಾ ಘೋಷಣೆಯಿಂದಾಗಿ ಹೆಚ್ಚಿನ ರೈತರಿಗೆ ಉಪಯೋಗವೇನೂ ಆಗುವುದಿಲ್ಲ. ಯಾಕೆಂದರೆ ರೈತರಲ್ಲಿ ಹೆಚ್ಚಿನವರು ಲೇವಾದೇವಿಗಾರರಿಂದ ಹಣ ಸಾಲ ಪಡೆಯುತ್ತಾರೆಯೇ ಹೊರತು ಬ್ಯಾಂಕ್ಗಳಿಂದಲ್ಲ ಎಂದಿದ್ದಾರೆ ಮೋದಿ.