ಈ ಪ್ರದೇಶದಲ್ಲಿ ಭಾರತದ ಯೋಧರು ಗಸ್ತು ನಡೆಸುತ್ತಿದ್ದಾಗ ಇದು ನಡೆದಿದೆ. ಇಲ್ಲಿ ಭಾರತದ ಯೋಧರು ಗಸ್ತು ನಡೆಸಬಾರದು ಎಂದು ಚೀನಾದ ಸೈನಿಕರು ಆಕ್ಷೇಪ ಎತ್ತಿದ್ದರು. ಆದರೆ ಭಾರತದ ಸೈನಿಕರು ಇದನ್ನು ಮಾನ್ಯ ಮಾಡಲಿಲ್ಲ. ಹಾಗಾಗಿ, ಹೊಯ್ಕೈ ನಡೆಯಿತು. ಇನ್ನಷ್ಟು ಯೋಧರನ್ನು ಸ್ಥಳಕ್ಕೆ ಕರೆಸಿಕೊಳ್ಳಲು ಎರಡೂ ಕಡೆಯವರು ಸೂಚನೆ ಕೊಟ್ಟರು. ಆದರೆ, ನಿಯೋಗ ಮಟ್ಟದ ಮಾತುಕತೆ ಬಳಿಕ ಸಮಸ್ಯೆ ಪರಿಹಾರ ಆಗಿದೆ.