ಇದಕ್ಕೂ ಮುನ್ನ ನಡೆದ ವಿಚಾರಣೆಯಲ್ಲಿ ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ, ‘ಪ್ರತಿಭಟನೆ ತುಂಬಾ ಶಾಂತರೀತಿಯಲ್ಲಿ ನಡೆದಿದೆ. ದಾರಿಹೋಕರಿಗೆ ಏನಾದರೂ ತೊಂದರೆ ಆಗಿದ್ದರೆ ಅದು ಪೊಲೀಸರು ಹಾಕಿದ ಬ್ಯಾರಿಕೇಡ್ಗಳಿಂದಲೇ ಹೊರತು ಪ್ರತಿಭಟನೆಯಿಂದ ಅಲ್ಲ. ಪ್ರತಿಭಟನಾ ಸ್ಥಳದಿಂದ ತುಂಬಾ ದೂರದಲ್ಲಿ ಅನಗತ್ಯವಾಗಿ ಈ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ’ ಎಂದು ಕೋರ್ಟ್ನ ಗಮನಕ್ಕೆ ತಂದರು.