ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರ ವರೆಗೆ ವೈರಾಗ್ಯಮೂರ್ತಿ ಬಾಹುಬಲಿಗೆ ಮಸ್ತಕಾಭಿಷೇಕ ನಡೆಯಿತು. ನಂತರ ತೊಟ್ಟಿಲು ಪೂಜೆ. ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ 6.30ಕ್ಕೆ ಪ್ರಾರಂಭವಾದ ಬಾಹುಬಲಿ ಮೂರ್ತಿ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು. ಮೆರವಣಿಗೆಯಲ್ಲಿ ನಡೆದ ಸಾಮೂಹಿಕ ನೃತ್ಯ ಮನಮೋಹಕವಾಗಿತ್ತು. ಗಂಡಸರು, ಹೆಂಗಸರು, ಯುವಕ ಯುವತಿಯರು ಒಗ್ಗೂಡಿ ಹೆಜ್ಜೆಹಾಕಿದ್ದು ಆಕರ್ಷಕವಾಗಿತ್ತು. ಮಹಾವೀರ ಜೈನ ಮಂಡಳಿಯ ಕಾರ್ಯಕಾರಿ ಸಮಿತಿ ಹಾಗೂ ಮಹಾವೀರ ಯುವಕ ಮಂಡಳಿ ವತಿಯಿಂದ ಉತ್ಸವ ಆಯೋಜಿಸಲಾಗಿತ್ತು.