ಛತ್ರು ಗ್ರಾಮ ಮನಾಲಿಯಿಂದ 80 ಕಿ.ಮೀ ದೂರದಲ್ಲಿದೆ. ಪ್ರವಾಹದಿಂದಾಗಿ ಚಿತ್ರ ತಂಡವನ್ನು ಸಂಪರ್ಕಿಸಲು ಆಗುತ್ತಿಲ್ಲ. ಆಹಾರ ದಾಸ್ತಾನು ಎರಡು ದಿನಗಳಿಗಷ್ಟೇ ಇದ್ದು, ಚಿತ್ರ ತಂಡದ ಜೊತೆ ಇನ್ನೂ 200 ಜನರು ಇದ್ದಾರೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರುಳೀಧರನ್ ಅವರ ಸಹಾಯ ಕೋರಲಾಗಿದೆ ಎಂದು ಮಂಜು ಅವರ ಸಹೋದರ ಮಧು ವಾರಿಯರ್ ಹೇಳಿದ್ದರು.