ಕೋಲ್ಕತ್ತ : ಖಾಸಗಿ ಸಂಸ್ಥೆಯ ವಿಮಾನದಲ್ಲಿ ಕೋಲ್ಕತ್ತದಿಂದ ಬೆಂಗಳೂರಿಗೆ ಕುಟುಂಬದೊಂದಿಗೆ ಬರುತ್ತಿದ್ದ ಬಾಲಕನೊಬ್ಬ ಅಸ್ವಸ್ಥಗೊಂಡು ಅಸುನೀಗಿದ್ದಾನೆ.
‘ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆತರಲಾಗುತ್ತಿದ್ದ ಸುಮನ್ ಪಾಲ್ (16) ಸಾವಿಗೀಡಾಗಿದ್ದಾನೆ’ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
‘ಕೋಲ್ಕತ್ತದ ಎನ್ಎಸ್ಸಿ ಬೋಸ್ ಅಂತರ ರಾಷ್ಟ್ರೀಯ ನಿಲ್ದಾಣದಿಂದ ವಿಮಾನ ಹೊರಡುತ್ತಿದ್ದಂತೆ ಬಾಲಕನ ಪ್ರಜ್ಞೆ ತಪ್ಪಿತು. ಕೂಡಲೇ ಪೈಲಟ್ ನಿಯಂತ್ರಣ ಕೊಠಡಿಗೆ ಈ ಕುರಿತು ಮಾಹಿತಿ ನೀಡಿದರು. ವಿಮಾನ ಇಳಿಸಿ, ಬಾಲಕನನ್ನು ಆಸ್ಪತ್ರೆಗೆ ಕಳುಹಿಸಲಾಯಿತು’ ಎಂದು ಅವರು ತಿಳಿಸಿದ್ದಾರೆ.
‘ಮಾರ್ಗಮಧ್ಯೆದಲ್ಲಿಯೇ ಬಾಲಕ ಅಸುನೀಗಿದ್ದಾನೆ’ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದರು.