ರಾಣಾ ಪ್ರತಾಪ್ ಜಲಾಶಯದಿಂದ ನೀರು ಹೊರಬಿಟ್ಟ ಕಾರಣ ರಸ್ತೆ ಸಂಪರ್ಕ ಕಡಿತಗೊಂಡು, ವಿದ್ಯಾರ್ಥಿಗಳು ಶಾಲೆಯಲ್ಲೇ ಉಳಿಯಬೇಕಾಯಿತು. ಸಂತ್ರಸ್ತರ ಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಸ್ಥಳೀಯರು ಆಹಾರ ನೀಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಶಾಲಾ ಆವರಣದಿಂದ ಸ್ಥಳಾಂತರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ (ಎನ್ಡಿಆರ್ಎಫ್) ನೆರವಾಯಿತು. ಪ್ರತಾಪಗಡ ಜಿಲ್ಲೆಯಲ್ಲೂ ಪ್ರವಾಹ ರೀತಿ ಸ್ಥಿತಿ ಕಂಡುಬಂದಿದೆ. ಸಂಕಷ್ಟಕ್ಕೆ ಸಿಲುಕಿದ್ದ ಸ್ಥಳೀಯರನ್ನು ಎನ್ಡಿಆರ್ಎಫ್ ರಕ್ಷಿಸಿತು. ನಿರಂತರ ಮಳೆಯಿಂದ ಜಾಖಮ್, ಮಾಹಿ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದೇ ಪ್ರವಾಹಕ್ಕೆ ಕಾರಣ.