ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಮಂಡನೆಗೂ ಮೊದಲು ರಾಷ್ಟ್ರಪತಿ ಭೇಟಿ ಮಾಡಿದ ಸೀತಾರಾಮನ್‌

Last Updated 5 ಜುಲೈ 2019, 5:25 IST
ಅಕ್ಷರ ಗಾತ್ರ

ನವದೆಹಲಿ: ಬಹು ನಿರೀಕ್ಷೆಯ ಬಜೆಟ್‌ ಮಂಡನೆಗೆ ಸಂಸತ್‌ಗೆ ತೆರಳುವ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಷ್ಟ್ರಪತಿ ರಮಾನಾಥ್‌ ಕೋವಿಂದ್‌ ಅವರನ್ನು ಭೇಟಿ ಮಾಡಿದರು.

ಬಜೆಟ್ ದಾಖಲೆಗಳನ್ನು ಕೆಂಪು ವಸ್ತ್ರದಲ್ಲಿ ಹಿಡಿದು ತೆರಳಿದ ಸೀತಾರಾಮನ್‌ ಅವರು, ರಾಷ್ಟ್ರಪತಿ ಭವನದಲ್ಲಿ ರಮಾನಾಥ್‌ ಕೋವಿಂದ್‌ ಅವರನ್ನು ಭೇಟಿ ಮಾಡಿದರು.

ಅಲ್ಲಿಂದ ಸೀತಾರಾಮನ್‌ ಅವರು, ಸಂಸತ್‌ನಲ್ಲಿ ಆರಂಭವಾದ ಕೇಂದ್ರ ಸಚಿವ ಸಂಪುಟ ಸಭೆಗೆ ತೆರಳಿದರು. ಸಭೆಯ ಬಳಿಕ ಬಜೆಟ್ ಮಂಡನೆಗೆ ಸದನಕ್ಕೆ ಬರಲಿದ್ದಾರೆ.

ಬಜೆಟ್‌ ಮಂಡಿಸಲು ಪ್ರತಿಯನ್ನು ಈವರೆಗೆ ಸಚಿವರು ಚರ್ಮದ ಸೂಟ್‌ಕೇಸ್‌ನಲ್ಲಿ ತರುತ್ತಿದ್ದರು. ಆ ಶೀಷ್ಟಾಚಾರವನ್ನು ಮುರಿದ ಸೀತಾರಾಮನ್‌ ಅವರು, ದಾಖಲೆ ಪ್ರತಿಯನ್ನು ಕೆಂಪು ವಸ್ತ್ರದಲ್ಲಿ ತಂದಿದ್ದಾರೆ.

ಬಜೆಟ್‌ ಪ್ರತಿಗಳನ್ನು ಸಂಸತ್‌ಗೆ ತರಲಾಗುತ್ತಿದೆ. 11ಗಂಟೆಗೆ ಮಂಡನೆ ಆರಂಬವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT