ನವದೆಹಲಿ: ಮಿಷನ್ ಶಕ್ತಿ ಬಗ್ಗೆ ಯುಪಿಎ ಸರ್ಕಾರ ಒಪ್ಪಿಗೆ ನೀಡಿದ್ದರೆ, 2014-2015ರ ವೇಳೆಯಲ್ಲಿಯೇ ಉಪಗ್ರಹ ನಿಗ್ರಹ ಕ್ಷಿಪಣಿ ಸಾಮರ್ಥ್ಯವನ್ನು ಭಾರತ ಹೊಂದುತ್ತಿತ್ತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಮಾಜಿ ಮುಖ್ಯಸ್ಥ ವಿ.ಕೆ ಸಾರಸ್ವತ್ ಹೇಳಿದ್ದಾರೆ.
Former DRDO Chief Dr VK Saraswat on #MissionShakti: We made presentations to National Security Adviser&National Security Council, when such discussions were held, they were heard by all concerned, unfortunately, we didn't get positive response (from UPA), so we didn't go ahead. pic.twitter.com/qJDMtc3Kf2
ಇಸ್ರೊ ಅಧ್ಯಕ್ಷ ಜಿ.ಮಾಧವನ್ ನಾಯರ್ ಅವರ ಮಾತನ್ನು ಬೆಂಬಲಿಸಿದ ಸಾರಸ್ವತ್, ದಶಕದ ಹಿಂದೆಯೇ ಭಾರತ ಉಪಗ್ರಹ ನಿಗ್ರಹ ಕ್ಷಿಪಣಿ ಸಾಮರ್ಥ್ಯ ಸಿದ್ಧಿಸಿತ್ತು. ಆದರೆ ಅದನ್ನು ತೋರ್ಪಡಿಸಲು ಅಂದು ಅಧಿಕಾರದಲ್ಲಿದ್ದ ಸರ್ಕಾರಕ್ಕೆ ಸಂಕಲ್ಪ ಶಕ್ತಿ ಇರಲಿಲ್ಲ ಎಂದಿದ್ದಾರೆ. ಆಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿಯ ಮುಂದೆ ನಾವು ಈ ವಿಷಯವನ್ನು ಪ್ರಸ್ತುತ ಪಡಿಸಿದ್ದೆವು, ಆದರೆ ದುರದೃಷ್ಟವಶಾತ್ ಯುಪಿಎ ಸರ್ಕಾರದಿಂದ ನಮಗೆ ಧನಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಹಾಗಾಗಿ ನಾವು ಮುಂದುವರಿಸಿಲ್ಲ ಎಂದು ಸಾರಸ್ವತ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಆ ಕಾಲದಲ್ಲಿ ಶಿವ ಶಂಕರ್ ಮೆನನ್ ಭದ್ರತಾ ಸಲಹೆಗಾರರಾಗಿದ್ದರು,
ಪ್ರಧಾನಿ ಮೋದಿಗೆ ಧೈರ್ಯ ಇದೆ ಹಾಗಾಗಿ ಅವರು ಇದಕ್ಕೆ ಸಮ್ಮತಿ ನೀಡಿದರು ಎಂದಿದ್ದಾರೆಸಾರಸ್ವತ್.
ಡಾ. ಸತೀಶ್ ರೆಡ್ಡಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜತ್ ದೊಬಾಲ್ ಅವರು ಈ ಪ್ರಸ್ತಾಪವನ್ನು ಮೋದಿಯ ಮುಂದಿರಿಸಿದಾಗ ನೀವು ಮುಂದುವರಿಯಿರಿ ಎಂದು ಅವರು ಹೇಳಿದ್ದರು. 2012-13ರಲ್ಲಿಯೇ ಇದಕ್ಕೆ ಅನುಮತಿ ನೀಡಿದ್ದರೆ, 2014-15ರಲ್ಲಿಯೇ ಈ ಕಾರ್ಯ ನಡೆಯುತ್ತಿತ್ತು ಎಂದು ಸಾರಸ್ವತ್ ಹೇಳಿದ್ದಾರೆ.