ಅರಸೀಕೆರೆ: ತೆಂಗು ಬೆಳೆಗಾರರಿಗೆ ಪರಿಹಾರ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ನಡೆಸುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರ ಐದನೇ ದಿನಕ್ಕೆ ಕಾಲಿರಿಸಿತು. ತಾಲ್ಲೂಕಿನ ಗೀಜೀಹಳ್ಳಿಯ ರೈತರ ತೆಂಗಿನ ತೋಟದಲ್ಲಿ ಪ್ರತಿಭಟನೆ ಆರಂಭಿಸಲಾಗಿದೆ. ಗಮನ ಸೆಳೆಯುವ ಸಲುವಾಗಿ ತೋಟದಲ್ಲಿ ಶಾಸಕರು ಧರಣಿ ಆರಂಭಿಸಿದ್ದಾರೆ.