ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸತ್ಯಜಿತ್, ‘ಕ್ಷೇತ್ರದಲ್ಲಿ ಈಗ ಆಯ್ಕೆ ಮಾಡಿದ ಅಭ್ಯರ್ಥಿ ಭರತ್ ಶೆಟ್ಟಿ ಅವರಷ್ಟು ಶಕ್ತಿ ನನಗೆ ಇಲ್ಲ ಎಂದು ಪಕ್ಷದ ಪ್ರಮುಖರು ನೇರವಾಗಿ ಹೇಳಿದರೆ ಇರುವ ಸ್ಥಾನವನ್ನೂ ತ್ಯಜಿಸಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ. ನನ್ನ ವಿಚಾರದಲ್ಲಿ ತಪ್ಪಾಗಿದ್ದರೆ, ಅದನ್ನು ಒಪ್ಪಿಕೊಳ್ಳಬೇಕು. ಸೂಕ್ತ ಸ್ಥಾನದ ಭರವಸೆ ನೀಡಬೇಕು. ಮಂಗಳವಾರ ಬೆಳಿಗ್ಗೆ 8 ಗಂಟೆಯೊಳಗೆ ತೀರ್ಮಾನ ತಿಳಿಸದಿದ್ದರೆ, ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.