‘ಅರ್ಹತಾ ಸುತ್ತಿನ ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆದಿದ್ದವು. ಅಕಾಡೆಮಿಯ ಆರು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ಆಯ್ಕೆಯಾಗಿದ್ದರು. ಆದರೆ, ಹಣಕಾಸು ತೊಂದರೆಯಿಂದಾಗಿ ಅವರು ವೀಸಾ, ಪಾಸ್ಪೋರ್ಟ್ ಪಡೆಯುವ ಹಂತದಲ್ಲೇ ಹಿಂದೆ ಸರಿದರು. ಪ್ರೇರಣಾಗೆ ಅಲ್ಲಿಗೆ ಸ್ಪರ್ಧಿಸಿ, ಪ್ರತಿಭೆ ಪ್ರದರ್ಶಿಸುವ ಬಯಕೆ ಇದೆ. ಇದಕ್ಕಾಗಿ ಆಕೆಗೆ ನಾವು ನೆರವಾಗುತ್ತಿದ್ದೇವೆ. ಕುಟುಂಬದವರು ಎಲ್ಲ ಹಣವನ್ನೂ ಹೊಂದಿಸುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.