ಆವರಣದಲ್ಲಿದ್ದ ಬಿಡಾದಿ ದನಗಳಿಗೆ ಬದನೆಕಾಯಿ ಆಹಾರವಾಯಿತು. ಒಂದು ಪುಟ್ಟಿ ಬದನೆಕಾಯಿಗೆ ₹ 20 ಸಿಗದಿದ್ದಾಗ ಬೆಳೆ ಬೆಳೆದ ರೈತರು ಕಂಗಾಲಾಗಿ ಹೋದರು.‘ರೈತರು ಬಿತ್ತುವ ವೇಳೆಯಲ್ಲಿ ಬದನೆಗೆ ಒಳ್ಳೇ ಬೆಲೆ ಇತ್ತು, ಈಗ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಸರ್ಕಾರ ಸೂಕ್ತ ಪರಿಹಾರವನ್ನು ನೀಡಬೇಕು’ ಎಂದು ಸವದತ್ತಿಯ ಹಿರಿಯ ನಾಗರೀಕ ಬಸವರಾಜ ಕಾರದಗಿ ‘ಪ್ರಜಾವಾಣಿ’ ತಿಳಿಸಿದರು.