ವಾಹನ ದಟ್ಟಣೆ, ಕಸ ವಿಲೇವಾರಿ, ಕೆರೆಗಳ ಮಾಲಿನ್ಯ ಇತ್ಯಾದಿ ಸಮಸ್ಯೆಗಳ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಉದ್ದುದ್ದ ಲೇಖನ ಬರೆಯುತ್ತ, ಆಡಳಿತ ವ್ಯವಸ್ಥೆ ಮತ್ತು ಸರ್ಕಾರದ ಮೇಲೆ ವಾಗ್ದಾಳಿ ಮಾಡುವ, ದಿನಗಟ್ಟಲೆ ಚರ್ಚಿಸುವ ಬುದ್ಧಿವಂತರು ಮತ್ತು ಸುಶಿಕ್ಷಿತರೇ ಮತದಾನ ಮಾಡಿಲ್ಲ ಎಂದಾದರೆ, ಅವರಿಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಇರುತ್ತದೆಯೇ? ಈ ಬಗ್ಗೆ ನಗರದ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.