ಸೇನಾ ದಿನದ ಅಂಗವಾಗಿ ಇಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇನಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು,‘ದೇಶದ ಪಶ್ಚಿಮ ಗಡಿಯಲ್ಲಿ (ಪಾಕಿಸ್ತಾನ ಭಾಗದಲ್ಲಿ) ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಹೇಗೆ ಎನ್ನುವುದು ಸೇನೆಗೆ ಚೆನ್ನಾಗಿ ಗೊತ್ತಿದೆ. ಆದರೆ, ಜಮ್ಮು–ಕಾಶ್ಮೀರದ ಜನ ಸೇನೆಗೆ ನೈತಿಕ ಬೆಂಬಲ ನೀಡಬೇಕು’ ಎಂದು ಅವರು ಹೇಳಿದರು.