ಮಾರ್ಚ್ 18ರಂದು ಥಾಯ್ಲೆಂಡ್ನಿಂದ ದೆಹಲಿಗೆ ಆಗಮಿಸಿದ್ದ ಜೀಬಾಟ್, ಇಸ್ತಾಂಬುಲ್ಗೆ ತೆರಳಬೇಕಿತ್ತು. ಆದರೆ, ಅಷ್ಟೊತ್ತಿಗಾಗಲೇ, ದೇಶದಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಿದ್ದರಿಂದ ನಿಲ್ದಾಣದಲ್ಲೇ ಉಳಿಯಬೇಕಾಯಿತು.ಜೀಬಾಟ್ ಬಳಿ ಭಾರತೀಯ ವೀಸಾ ಇಲ್ಲದ್ದರಿಂದ ದೇಶದಲ್ಲಿ ಸಂಚರಿಸಲು ಅವರಿಗೆ ಅನುಮತಿ ಸಿಗಲಿಲ್ಲ. ನಿಲ್ದಾಣದ ಆವರಣದಲ್ಲಿಯೇ ಅವರಿಗೆ ಊಟ ಮತ್ತು ಮಲಗಲು ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.