ನವದೆಹಲಿ:ಬಿಜೆಪಿ ಸದಾಚಾರದ ಬುನಾದಿಯನ್ನು ಮರೆಯಬಾರದು ಎಂದು ನಾನು ವಿನಂತಿಸುತ್ತಿದ್ದೇನೆ-ಹೀಗೆ ಟ್ವೀಟ್ ಮಾಡಿದ್ದು ಬಿಜೆಪಿ ನಾಯಕಿ ಉಮಾ ಭಾರತಿ.
ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಗೋಪಾಲ್ ಕಾಂಡಾ ಅವರ ಬೆಂಬಲವನ್ನು ಪಡೆದಿದ್ದು, ಈ ಬಗ್ಗೆ ಉಮಾ ಭಾರತಿ ಸರಣಿ ಟ್ವೀಟ್ಗಳ ಮೂಲಕ ಬಿಜೆಪಿಗೆ ಹಿತೋಪದೇಶ ನೀಡಿದ್ದಾರೆ.
2012 ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿದ್ದಾರೆ 53ರ ಹರೆಯದ ಗೋಪಾಲ್ ಕಾಂಡಾ. ಗೀತಿಕಾ ಶರ್ಮಾ ಆತ್ಮಹತ್ಯಾ ಟಿಪ್ಪಣಿಯಲ್ಲಿ ಕಾಂಡಾ ಹೆಸರು ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಕಾಂಡಾ ಜಾಮೀನು ಪಡೆದು ಹೊರ ಬಂದಿದ್ದರು.
ಹರಿಯಾಣ ಸರ್ಕಾರದಲ್ಲಿ ಕಾಂಡಾ ಅವರನ್ನು ಸೇರ್ಪಡೆ ಮಾಡಿದ್ದಕ್ಕಾಗಿ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
1. माननीय @narendramodi जी का, @AmitShah जी का, @JPNadda जी, @mlkhattar जी का एवं @Dev_Fadnavis जी का महाराष्ट्र एवं हरियाणा के शानदार जीत के लिए अभिनंदन।
— Uma Bharti (@umasribharti) October 25, 2019
2. जब तक मोदी जी की लहर नहीं आई थी, हम हरियाणा में दो विधानसभा सीटें जीतने पर भी खुश हो जाते थे। इसलिए हरियाणा में पहले चुनाव में सरकार बना लेना और दूसरे चुनाव में भी सबसे बड़ी पार्टी बनकर आना असाधारण उपलब्धि है। यह सब @narendramodi जी के तपस्या का परिणाम है।
— Uma Bharti (@umasribharti) October 25, 2019
3. मैं अभी अपने गंगा प्रवास पर हिमालय में गंगा के किनारे हूँ। यहाँ टीवी नहीं है, मैं मोबाइल पर सारी ख़बरें ले रही हूँ, मुझे जानकारी मिली है कि हम हरियाणा में भी सरकार बना सकते हैं। यह एक अच्छी ख़बर है।
— Uma Bharti (@umasribharti) October 25, 2019
4. मुझे जानकारी मिली है कि गोपाल कांडा नाम के एक निर्दलीय विधायक का समर्थन भी हमें मिल सकता है। इसी पर मुझे कुछ कहना है।
— Uma Bharti (@umasribharti) October 25, 2019
5. अगर गोपाल कांडा वही व्यक्ति है जिसकी वजह से एक लड़की ने आत्महत्या की थी तथा उसकी माँ ने भी न्याय नहीं मिलने पर आत्महत्या कर ली थी, मामला अभी कोर्ट में विचाराधीन है, तथा यह व्यक्ति ज़मानत पर बाहर है।
— Uma Bharti (@umasribharti) October 25, 2019
6. गोपाल कांडा बेक़सूर है या अपराधी, यह तो क़ानून साक्ष्यों के आधार पर तय करेगा, किंतु उसका चुनाव जीतना उसे अपराधों से बरी नहीं करता। चुनाव जीतने के बहुत सारे फैक्टर होते हैं।
— Uma Bharti (@umasribharti) October 25, 2019
7. मैं @BJP4India जी से अनुरोध करूँगी कि हम अपने नैतिक अधिष्ठान को न भूलें। हमारे पास तो @narendramodi जी जैसी शक्ति मौजूद है, एवं देश क्या पूरे दुनिया की जनता मोदी जी के साथ है तथा मोदी जी ने सतोगुणी ऊर्जा के आधार पर राष्ट्रवाद की शक्ति खड़ी की है।
— Uma Bharti (@umasribharti) October 25, 2019
8. हरियाणा में हमारी सरकार ज़रूर बने, लेकिन यह तय करिए कि जैसे @BJP4India के कार्यकर्ता साफ़-सुथरे ज़िंदगी के होते हैं, हमारे साथ वैसे ही लोग हों। #HaryanaElections2019
— Uma Bharti (@umasribharti) October 25, 2019
ಈ ಬಗ್ಗೆ ಟ್ವೀಟಿಸಿದ ಉಮಾಭಾರತಿ,ಯುವತಿಯೊಬ್ಬಳ ಆತ್ಮಹತ್ಯೆಗೆ ಕಾರಣವಾದ ವ್ಯಕ್ತಿ ಇದೇ ಕಾಂಡಾ ಆಗಿದ್ದರೆ, ಯುವತಿಯ ಅಮ್ಮನ ಆತ್ಮಹತ್ಯೆ ಪ್ರಕರಣದಲ್ಲಿಯೂ ಅವರು ಆರೋಪ ಎದುರಿಸುತ್ತಿದ್ದಾರೆ. ಆವರು ನಿರಪರಾಧಿ ಅಥವಾ ತಪ್ಪಿತಸ್ಥನೇ ಆಗಿರಲಿ ಅದನ್ನು ತೀರ್ಮಾನಿಸುವುದು ಕಾನೂನು. ಚುನಾವಣೆ ಗೆಲ್ಲುವುದರಿಂದ ಅವರು ದೋಷಮುಕ್ತರಾಗುವುದಿಲ್ಲ. ಚುನಾವಣೆ ಗೆಲುವಿಗೆ ಹಲವಾರು ಕಾರಣಗಳಿರುತ್ತವೆ ಎಂದಿದ್ದಾರೆ.
ಬಿಜೆಪಿ ತನ್ನ ನೈತಿಕತೆಯ ಬುನಾದಿಯನ್ನು ಮರೆಯಬಾರದು. ನಮ್ಮಲ್ಲಿ ನರೇಂದ್ರ ಮೋದಿಯಂತ ಶಕ್ತಿ ಇದೆ. ಇಡೀ ದೇಶ ಮಾತ್ರವಲ್ಲ ಇಡೀ ಜಗತ್ತೇ ಮೋದಿ ಜತೆ ಇದೆ.ನಮ್ಮ ಜತೆ ಇರುವವರು ಎಲ್ಲರೂ ದೋಷಮುಕ್ತರು ಎಂಬುದನ್ನು ಖಾತರಿ ಪಡಿಸಬೇಕಿದೆ ಎಂದು ಉಮಾ ಭಾರತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಯುವತಿ ಆತ್ಮಹತ್ಯೆಗೆ ಮಾನಸಿಕ ಹಿಂಸೆ ಆರೋಪ:ಹರಿಯಾಣ ಸಚಿವರ ವಿರುದ್ಧ ಪ್ರಕರಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.