ಅರ್ಥವ್ಯವಸ್ಥೆ ಹದಗೆಟ್ಟಿರುವುದಕ್ಕೆ ಕೆಲ ಕಾರಣಗಳನ್ನೂ ನೀಡಿದ್ದಾರೆ. ‘ನೋಟು ರದ್ದತಿ, ಜಿಎಸ್ಟಿ ಜಾರಿ, ತೆರಿಗೆ ಭಯೋತ್ಪಾದನೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಧಾನಿ ಕಚೇರಿಯ ಏಕಸ್ವಾಮ್ಯದಂತಹ ತಪ್ಪುಗಳನ್ನು ಸರ್ಕಾರ ಮೊಂಡುತನದಿಂದ ಸಮರ್ಥಿಸಿಕೊಂಡಾಗ, ಹದಗೆಟ್ಟ ಆರ್ಥಿಕತೆಯ ಅಂದಾಜು ಸಿಗುವುದಾದರೂ ಹೇಗೆ’ ಎಂದವರು ಪ್ರಶ್ನಿಸಿದ್ದಾರೆ.