ನವದೆಹಲಿ: ನಿಗದಿತ ಅವಧಿಯಲ್ಲಿ ಕರ್ತಾರಪುರ ಕಾರಿಡಾರ್ ಪೂರ್ಣಗೊಳಿಸಲು ಮೋದಿ ಸರ್ಕಾರ ಬದ್ಧ ಎಂದು ಗೃಹಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಕರ್ತಾರಪುರ ಕಾರಿಡಾರ್ ಅನ್ನು ಮುಕ್ತಗೊಳಿಸುವ ಸಂಬಂಧ ಪಂಜಾಬ್ನ ಗುರುದಾಸಪುರದಲ್ಲಿ ಭಾರತ–ಪಾಕಿಸ್ತಾನದ ತಾಂತ್ರಿಕ ಸಮಿತಿ ಸಭೆ ನಡೆಸಿದ ನಂತರ ಗೃಹಸಚಿವರು ಈ ಭರವಸೆ ನೀಡಿದ್ದಾರೆ. 370ನೇ ವಿಧಿ ರದ್ದಾದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ಇರುವಾಗಲೇ ಈ ಸಭೆ ನಡೆದಿದೆ.