ಈ ಸಮುದಾಯದವರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರು ಎಂದು ಪರಿಗಣಿಸಿ ಫೆ. 13ರಂದು ರಾಜಸ್ಥಾನ ಸರ್ಕಾರವು ಕಾನೂನು ತಿದ್ದುಪಡಿಯ ಮೂಲಕ ವಿಶೇಷ ಮೀಸಲಾತಿ ಕಲ್ಪಿಸಿತ್ತು. ಗುಜ್ಜರ್, ಬಂಜಾರ, ಗಡಿಯಾ ಲೋಹರ್, ರೈಕಾ ಮತ್ತು ಗಡಾರಿಯಾ ಸಮುದಾಯಗಳು ಈ ಮೀಸಲಾತಿ ಸೌಲಭ್ಯ ಪಡೆದಿವೆ. ಇದನ್ನು ಪ್ರಶ್ನಿಸಿ ಅರವಿಂದ್ ಶರ್ಮಾ ಮತ್ತು ಬಾದಲ್ ವರ್ಮಾ ಎಂಬುವವರು ಅಲ್ಲಿನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು.