ಇಲ್ಲಿನಖೆರೋನಿಬರಿ ಗ್ರಾಮದ ಧೋಲಾ ಸಾದಿಯಾ ಸೇತುವೆ ಸಮೀಪದ ಅಂಗಡಿಯಲ್ಲಿ ಕೂತಿದ್ದ ಆರು ಮಂದಿಯನ್ನು ರಾತ್ರಿ 7.30ರಿಂದ 8 ಗಂಟೆ ಸುಮಾರಿಗೆ ಮುಸುಕುಧಾರಿಗಳು ಕರೆದೊಯ್ದಿದ್ದಾರೆ. ನಂತರ ಎಲ್ಲರನ್ನೂ ಸೇತುವೆ ಮೇಲೆ ಸಾಲಾಗಿ ನಿಲ್ಲಿಸಿ, ಅವರ ಬಳಿಯಿದ್ದ ಮೊಬೈಲ್, ನಗನಾಣ್ಯ ಪಡೆದು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಒಬ್ಬ ವ್ಯಕ್ತಿ ಸೇತುವೆಯಿಂದ ಕೆಳಗೆ ಬಿದ್ದು ಬದುಕುಳಿದಿದ್ದಾನೆ. ಆತನನ್ನು ನಾಮಸುದ್ರಾ ಎಂದು ಗುರುತಿಸಲಾಗಿದೆ.