ಗುರುಗ್ರಾಮ:ಇಲ್ಲಿನ ಸೆಕ್ಟರ್ 49ರ ಆರ್ಕೇಡಿಯಾ ಮಾರ್ಕೆಟ್ನ ಹೊರಭಾಗದಲ್ಲಿ ಶನಿವಾರ ಅಂಗರಕ್ಷಕನಿಂದಲೇ ಗುಂಡಿನ ದಾಳಿಗೆ ಒಳಗಾಗಿದ್ದ ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶರ ಪುತ್ರ ಧ್ರುವ(18) ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿದ್ದ ನ್ಯಾಯಾಧೀಶ ಕೃಷ್ಣಕಾಂತ್ ಪತ್ನಿ ರಿತು ಗಾರ್ಗ್(45) ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದರು. ಗುಂಡೇಟು ತಲೆಗೆ ತಗುಲಿರುವ ಧ್ರುವ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾರೆ.