ಕ್ಷೇತ್ರದ ಕುಗ್ರಾಮಗಳಿಗೂ ಸಂಪರ್ಕ ಸೌಲಭ್ಯ ಕಲ್ಪಿಸಿದ್ದರಿಂದ ವಿನೋದ್ ಖನ್ನಾ ಅವರು ‘ಸಂಪರ್ಕದ ಸರದಾರ’ ಎಂದೇ ಖ್ಯಾತರಾಗಿದ್ದರು. ಅವರ ಜತೆ ತಳಮಟ್ಟದಿಂದ ದುಡಿದಿದ್ದೇನೆ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ನಾನು ಗೆಲ್ಲಬಲ್ಲೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ನನ್ನ ಮೇಲೆ ಭಾರಿ ಒತ್ತಡವಿದೆ. ಕಾಂಗ್ರೆಸ್, ಆಮ್ ಆದ್ಮಿಯಿಂದಲೂ ನನಗೆ ಆಹ್ವಾನ ಬಂದಿತ್ತು ಎಂದು ಕವಿತಾ ಖನ್ನಾಅವರು ಹೇಳಿದ್ದಾರೆ.