ಹಿಂದೂ ಐಕ್ಯ ವೇದಿ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಬಂಧನ ವಿರೋಧಿಸಿ ಮಲ್ಲಪ್ಪುರಂನಲ್ಲಿ ಶನಿವಾರ ಪ್ರತಿಭಟನೆ ಕಾವೇರಿದೆ. ಬಂದ್ ವಿಚಾರ ತಿಳಿಯದ ಅನೇಕರು ತೊಂದರೆ ಅನುಭವಿಸಿದ್ದಾರೆ. ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಿಳಿದಿಲ್ಲ ಹಾಗೂ ಜಿಲ್ಲೆಯಾದ್ಯಂತ ಅಂಗಡಿಗಳು ಮುಚ್ಚಿದ್ದು, ವಾಣಿಜ್ಯ–ವಹಿವಾಟು ಸ್ಥಗಿತಗೊಂಡಿದೆ.