‘ಚುನಾವಣೆಯ ವೇಳೆ ದೇಶದಾದ್ಯಂತ ಇದ್ದ ವಿರೋಧಿ ಅಲೆಯನ್ನು ಗುರುತಿಸುವಲ್ಲಿ ನಾವು ವಿಫಲವಾದೆವು. ನಕಾರಾತ್ಮಕ ಫಲಿತಾಂಶ ದೊರೆತಿರುವುದು ಆಶ್ಚರ್ಯ ಮೂಡಿಸಿದೆ’ ಎಂದು ರಾಹುಲ್ ಅವರಿಗೆ ಹೇಳಿದ ಕುಮಾರಸ್ವಾಮಿ, ‘ಯಾವುದೇ ಕಾರಣಕ್ಕೂ ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಬೇಡಿ’ ಎಂಬ ಮನವಿ ಮಾಡಿದರು ಎಂದು ತಿಳಿದುಬಂದಿದೆ.