ಶ್ರೀನಗರ:ಉತ್ತರಭಾರತದಲ್ಲಿ ಪ್ರಸಕ್ತ ವರ್ಷದ ಮೊದಲ ಹಿಮಪಾತ ಆರಂಭವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಹಿಮಪಾತದಿಂದಾಗಿ ಅಪಾಯದಲ್ಲಿ ಸಿಲುಕಿದ್ದ 140 ಜನರನ್ನು ಸೇನೆ ಮತ್ತು ಪೊಲೀಸರು ರಕ್ಷಿಸಿದ್ದಾರೆ.
ಮಳೆ, ಹಿಮಪಾತದಿಂದಾಗಿ ಶುಕ್ರವಾರ ರಾತ್ರಿ ಮೊಘಲ್ ರಸ್ತೆಯಲ್ಲಿ ಮುಂದೆ ಪ್ರಯಾಣ ಬೆಳೆಸಲಾಗದೆ ಸಂಕಷ್ಟ ಎದುರಿಸುತ್ತಿದ್ದ 140 ಮಂದಿಯನ್ನು ರಕ್ಷಿಸಲಾಗಿದೆ.
ಪ್ರಯಾಣಿಕರನ್ನು ಸರಾನ್ ಕೋಟ್ನ ಸೇನಾ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಅವರಿಗೆ ಅಲ್ಲಿ ಊಟ ಮತ್ತು ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಎನ್ಐ ಟ್ವಿಟ್ ಮಾಡಿದೆ.
Poonch: 140 persons who were stranded at Mughal road following heavy rain & snowfall in the region, rescued by Indian Army and Police last night. Rescued people were taken to transit an army camp in Surankot & were provided foods & beds. #JammuAndKashmirpic.twitter.com/KeG2WUsiIw