ತಿರುವಳ್ಳುವರ್ ಪ್ರತಿಮೆಗೆ ಸೋಮವಾರ ಸೆಗಣಿ ಎರಚಿ ಅವಮಾನಗೊಳಿಸಲಾಗಿದ್ದ ತಂಜಾವೂರ್ ಜಿಲ್ಲೆಯ ಪಿಲ್ಲಯಾರಪಟ್ಟಿ ಗ್ರಾಮಕ್ಕೆ ಅರ್ಜುನ್ ಸಂಪತ್ ಭೇಟಿ ನೀಡಿದ್ದರು. ಏಣಿ ಏರಿದ ಸಂಪತ್ ಕೇಸರಿ ಬಣ್ಣದ ಶಾಲು ಮತ್ತು ರುದ್ರಾಕ್ಷಿ ಮಾಲೆ ಹಾಕಿ ದೀಪ ಬೆಳಗಿದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಸಂಪತ್ ಅವರನ್ನು ಬಂಧಿಸಿದರು.