ಈಗ ಈ ಸ್ಥಳವನ್ನು ‘ಗೋಸಾಯಿಗಂಜ್ ಕಬ್ರಿಸ್ತಾನ್ (ಶವ ಹೂಳುವ ಸ್ಥಳ) ಸಮಿತಿ’ಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ‘ಕಬ್ರಿಸ್ತಾನದ ಪಕ್ಕದಲ್ಲಿದ್ದ ಸ್ಥಳ ದಾಖಲೆ ಪ್ರಕಾರ ಹಿಂದೂಗಳಿಗೆ ಸೇರಿದ್ದಾಗಿತ್ತು. ಕೆಲವೊಮ್ಮೆ ಮುಸ್ಲಿಮರು ನಮಗೆ ಸೇರಿದ ಸ್ಥಳದಲ್ಲಿ ಶವಗಳನ್ನು ಹೂಳುತ್ತಿದ್ದರು. ಇದಕ್ಕೆ ನಾವು ವಿರೋಧಿಸುತ್ತಿದ್ದೆವು. ಆದರೂ ಈ ಪದ್ಧತಿ ಮುಂದುವರಿದಿತ್ತು. ಹಾಗಾಗಿ ಈ ಕ್ರಮ ಕೈಗೊಂಡೆವು’ ಎಂದು ಭೂಮಿ ಹಸ್ತಾಂತರಕ್ಕೆ ಸಹಿ ಹಾಕಿದವರಲ್ಲಿ ಒಬ್ಬರಾದ ಸೂರ್ಯ ಕುಮಾರ್ ಝಿಂಕನ್ ಮಹಾರಾಜ್ ತಿಳಿಸಿದ್ದಾರೆ.