ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್ ವಿ.ವಿ.ಯಲ್ಲಿ ಪಾಠ ಮಾಡಲ್ಲ ಎಂದರು ಇತಿಹಾಸಕಾರ ರಾಮಚಂದ್ರ ಗುಹಾ

Last Updated 2 ನವೆಂಬರ್ 2018, 7:13 IST
ಅಕ್ಷರ ಗಾತ್ರ

ಬೆಂಗಳೂರು:ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ವಿದ್ಯಾರ್ಥಿ ಸಂಘಟನೆ ‘ಅಖಿಲ ಭಾರತ ವಿದ್ಯಾರ್ಥಿ ಪರಿಷತ್’ (ಎಬಿವಿಪಿ)ತನ್ನನ್ನುದೇಶದ್ರೋಹಿ ಎಂದು ಆರೋಪಿಸಿದ ನಂತರ ಇತಿಹಾಸಕಾರ ರಾಮಚಂದ್ರ ಗುಹಾ ಗುಜರಾತ್‌ನ ಅಹಮದಾಬಾದ್ ವಿವಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಗುಹಾ, ‘ನನ್ನ ನಿಯಂತ್ರಣದಲ್ಲಿ ಇಲ್ಲದ ಕಾರಣಗಳಿಂದನಾನು ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.

ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಸೇರಿದಂತೆ ಹಲವರು ಗುಹಾರ ಅವರ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಗಾಂಧಿಯ ಕುರಿತು ಪುಸ್ತಕ ಬರೆದ ವಿದ್ವಾಂಸನೊಬ್ಬ, ಗಾಂಧಿಯನೆಲದಲ್ಲಿ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಪಾಠ ಮಾಡದ ಸನ್ನಿವೇಶ ಸೃಷ್ಟಿಯಾಗಿರುವುದು ವಿಪರ್ಯಾಸ’ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಅ.16ರಂದು ಅಹಮದಾಬಾದ್ ವಿವಿಯು ಗುಹಾ ಅವರನ್ನು ಮಾನವೀಯ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಮತ್ತು ಗಾಂಧಿ ಚಳಿಗಾಲದ ಶಾಲೆಯ ನಿರ್ದೇಶಕ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿತ್ತು. ಅ.19ರಂದು ಎಬಿವಿಪಿ ಕಾರ್ಯಕರ್ತರು ಈ ನೇಮಕಾತಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.

ಈ ಕುರಿತು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ದಿನಪತ್ರಿಕೆಗೆಪ್ರತಿಕ್ರಿಯಿಸಿದಎಬಿವಿಪಿ ಅಹಮದಾಬಾದ್ ನಗರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ದೇಸಾಯಿ, ‘ಗುಹಾ ನೇಮಕ ವಿರೋಧಿಸಿನಾವು ವಿವಿಕುಲಸಚಿವರಿಗೆ ಪತ್ರ ಬರೆದಿದ್ದೆವು. ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಬುದ್ಧಿಜೀವಿಗಳು ಬರಬೇಕು,ನಗರ ನಕ್ಸಲ್ ಎಂದು ಕರೆಸಿಕೊಳ್ಳುವ ದೇಶದ್ರೋಹಿಗಳಲ್ಲ. ಇಂಥವರು ವಿಶ್ವವಿದ್ಯಾಲಯಕ್ಕೆ ಬಂದರೆ ಗುಜರಾತ್‌ನಲ್ಲಿಯೂ ರಾಷ್ಟ್ರವಿರೋಧಿ ಭಾವನೆಗಳು ಪ್ರಬಲವಾಗುತ್ತವೆ’ ಎಂದು ಕುಲಸಚಿವರಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದೆವು ಎಂದು ಹೇಳಿದ್ದಾರೆ.

ತಮ್ಮ ನಿರ್ಧಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಗುಹಾ,‘ನನ್ನ ನಿಯಂತ್ರಣದಲ್ಲಿ ಇಲ್ಲದ ಪರಿಸ್ಥಿತಿಯ ಕಾರಣದಿಂದ ನಾನು ಅಹಮದಾಬಾದ್ ವಿ.ವಿ.ಗೆ ಸೇರಬಾರದು ಎಂದು ನಿರ್ಧರಿಸಿದ್ದೇವೆ. ಅಹಮದಾಬಾದ್ ವಿವಿಗೆ ಶುಭ ಹಾರೈಸುತ್ತೇನೆ. ಅತ್ಯುತ್ತಮ ಬೋಧಕ ಸಿಬ್ಬಂದಿ ಮತ್ತು ಕುಲಪತಿ ಇಲ್ಲಿದ್ದಾರೆ. ಗಾಂಧಿಯ ವಿಚಾರಗಳಿಗೆಒಂದಲ್ಲ ಒಂದು ದಿನ ಮತ್ತೆ ಜೀವ ಬರಲಿ’ ಎಂದು ಟ್ವಿಟ್ ಮಾಡಿದ್ದಾರೆ.

ವಿವಾದ ಕುರಿತು ಪ್ರತಿಕ್ರಿಯಿಸಿರುವಅಹಮದಾಬಾದ್‌ ವಿವಿಯ ಕುಲಸಚಿವ ಬಿ.ಎಂ.ಶಾ, ‘ವಿಶ್ವವಿದ್ಯಾಲಯವು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನಗೂ ಈ ವಿಷಯ ಟ್ವಿಟ್ ನೋಡಿದಾಗಿ ತಿಳಿಯಿತು. ಕುಲಪತಿ ಪ್ರಸ್ತುತ ದೇಶದಿಂದ ಹೊರಗಿದ್ದಾರೆ. ಮುಂದಿನ ಕ್ರಮಗಳ ಬಗ್ಗೆ ವಿವಿ ಆಲೋಚಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT