ನವದೆಹಲಿ: ಪ್ರಧಾನಮಂತ್ರಿ ವಸತಿ ಯೋಜನೆಯಡಿಯಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾಗೆ(ಶ್ರೀರಾಮ) ಮನೆಯೊಂದನ್ನು ನಿರ್ಮಿಸಿಕೊಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಬೇಡಿಕೆ ಮುಂದಿಟ್ಟಿದ್ದಾರೆ.
ಉತ್ತರ ಪ್ರದೇಶ ಘೋಸಿ ಚುನಾವಣಾ ಕ್ಷೇತ್ರದ ಸಂಸದರಾಗಿರುವ ಹರಿನಾರಾಯಣ್ ರಾಜ್ಭಹಾರ್ ಶ್ರೀರಾಮನಿಗೆ ಮನೆ ನಿರ್ಮಿಸುವಂತೆ ಬೇಡಿಕೆ ಇಟ್ಟವರು.
BJP MP from Uttar Pradesh's Ghosi, Hari Narayan Rajbhar has written to Ayodhya DM seeking a house under the Pradhan Mantri Awas Yojana for Lord Ram as 'he has been living in a tent.’ (file pic) pic.twitter.com/3NiyhwwW7G
ತಲೆ ಮೇಲೆ ಸೂರು ಇಲ್ಲದೆ ಶ್ರೀರಾಮ ವಿಪರೀತ ಚಳಿ, ಸುಡುವ ಬೇಸಿಗೆ ಮತ್ತು ಸುರಿವ ಮಳೆಗೆ ನಿಂತಿದ್ದಾರೆ.ಸೂರು ಇಲ್ಲದವರಿಗೆ ಸರ್ಕಾರ ವಸತಿ ನೀಡುತ್ತದೆ. ಹಾಗಾಗಿ ಪ್ರಧಾನಮಂತ್ರಿ ವಸತಿ ಯೋಜನೆಯಡಿಯಲ್ಲಿ ಶ್ರೀರಾಮನಿಗೊಂದು ಸೂರು ನಿರ್ಮಿಸಬೇಕೆಂದು ಹರಿನಾರಾಯಣ್ಜಿಲ್ಲಾಡಳಿತದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಹೆಚ್ಚಿನ ಒತ್ತಾಯ ಕೇಳಿ ಬರುತ್ತಿದೆ.