ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಮಂತ್ರಿ ವಸತಿ ಯೋಜನೆಯಡಿಯಲ್ಲಿ ಶ್ರೀರಾಮನಿಗೆ ಮನೆ ನಿರ್ಮಿಸಿ: ಬಿಜೆಪಿ ಸಂಸದ

Last Updated 28 ಡಿಸೆಂಬರ್ 2018, 6:33 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಮಂತ್ರಿ ವಸತಿ ಯೋಜನೆಯಡಿಯಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾಗೆ(ಶ್ರೀರಾಮ) ಮನೆಯೊಂದನ್ನು ನಿರ್ಮಿಸಿಕೊಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಬೇಡಿಕೆ ಮುಂದಿಟ್ಟಿದ್ದಾರೆ.

ಉತ್ತರ ಪ್ರದೇಶ ಘೋಸಿ ಚುನಾವಣಾ ಕ್ಷೇತ್ರದ ಸಂಸದರಾಗಿರುವ ಹರಿನಾರಾಯಣ್ ರಾಜ್‍ಭಹಾರ್ ಶ್ರೀರಾಮನಿಗೆ ಮನೆ ನಿರ್ಮಿಸುವಂತೆ ಬೇಡಿಕೆ ಇಟ್ಟವರು.

ತಲೆ ಮೇಲೆ ಸೂರು ಇಲ್ಲದೆ ಶ್ರೀರಾಮ ವಿಪರೀತ ಚಳಿ, ಸುಡುವ ಬೇಸಿಗೆ ಮತ್ತು ಸುರಿವ ಮಳೆಗೆ ನಿಂತಿದ್ದಾರೆ.ಸೂರು ಇಲ್ಲದವರಿಗೆ ಸರ್ಕಾರ ವಸತಿ ನೀಡುತ್ತದೆ. ಹಾಗಾಗಿ ಪ್ರಧಾನಮಂತ್ರಿ ವಸತಿ ಯೋಜನೆಯಡಿಯಲ್ಲಿ ಶ್ರೀರಾಮನಿಗೊಂದು ಸೂರು ನಿರ್ಮಿಸಬೇಕೆಂದು ಹರಿನಾರಾಯಣ್ಜಿಲ್ಲಾಡಳಿತದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಹೆಚ್ಚಿನ ಒತ್ತಾಯ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT