ನಗರಸಭೆ ಮೇಯರ್ ಚೌಧರಿ ಜಿತೇಂದ್ರ ನಾಥ ಸಿಂಗ್ ಮಾತನಾಡಿ, ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ಎಲ್ಲ ರೀತಿಯ ತೆರಿಗೆಯಿಂದಲೂ ವಿನಾಯಿತಿ ಪಡೆದಿರುವುದರಿಂದಾಗಿ ಆನಂದ್ ಭವನ್ಗೆ ಕೂಡ ತೆರಿಗೆಯನ್ನು ವಿಧಿಸಲು ಆಗುವುದಿಲ್ಲ. ಆದರೆ ಈಗ ತೆರಿಗೆ ವಿಧಿಸಿರುವುದು ತಪ್ಪು. ಈ ಕಟ್ಟಡ ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ಅಡಿಯಲ್ಲಿ ಬರುತ್ತದೆ. ಇದೊಂದು ಸ್ವಾತಂತ್ರ್ಯ ಹೋರಾಟದ ಸ್ಮಾರಕ ಮತ್ತು ಸ್ಮರಣಾರ್ಥ ವಸ್ತು ಸಂಗ್ರಹಾಲಯವಾಗಿದೆ. ಇದು ಶಿಕ್ಷಣದ ಕೇಂದ್ರವಾಗಿದೆ ಎಂದು ಹೇಳಿದರು.