ತಮಿಳುನಾಡಿನಲ್ಲಿ ತಲೆದೋರಿರುವ ನೀರಿನ ಬವಣೆಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಡಿಎಂಕೆ ತಿರುಚ್ಚಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆಯ ವೇಳೆ ಮಾತನಾಡಿರುವ ತಿರುಚ್ಚಿ ಪಶ್ಚಿಮ ಕ್ಷೇತ್ರದ ಶಾಸಕ ಕೆ.ಎನ್ ನೆಹರು, ‘ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸುವುದು ಸೂಕ್ತ. ಎಷ್ಟು ದಿನ ನಾವು ಕಾಂಗ್ರೆಸ್ ಅನ್ನು ಪಲ್ಲಕ್ಕಿಯಲ್ಲಿ ಹೊರುವುದು? ಇದು ನನ್ನ ಅಭಿಪ್ರಾಯ ಮಾತ್ರ. ಆದರೆ, ಪಕ್ಷದ ವರಿಷ್ಠ ಎಂ.ಕೆ ಸ್ಟಾಲಿನ್ ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ. ಒಂದು ವೇಳೆ ಹೆಗಲ ಮೇಲೆ ಕಾಂಗ್ರೆಸ್ ಅನ್ನು ಹೊರಬೇಕು ಎಂದು ಅವರು ಹೇಳಿದರೆ ನಾವು ಅದಕ್ಕೆ ಸಿದ್ಧ,’ ಎಂದೂ ನೆಹರೂ ಹೇಳಿದ್ದಾರೆ.