‘ತಲಗೇರಿ ಊರಿನ ಸುತ್ತ ದಟ್ಟ ಕಾಡು ಇದೆ. ಇದರಿಂದ ಕಾಡುಪ್ರಾಣಿಗಳು ಓಡಾಟ ಸಾಮಾನ್ಯವಾಗಿದೆ. ಹೀಗಾಗಿ ನಾನು ಹಲವಾರು ವರ್ಷಗಳಿಂದ ಇಂಥ ಪ್ರಾಣಿಗಳಿಗಾಗಿಯೇ ರಸ್ತೆ ಬದಿ ಒಂದು ತೊಟ್ಟಿ ನಿರ್ಮಿಸಿ ಅದರೊಳಗೆ ನೀರು ತುಂಬಿಸಿಡುತ್ತಿದ್ದೆ. ನರಿ, ಮೊಲ, ಮಂಗ, ದನ ಮುಂತಾದ ಪ್ರಾಣಿಗಳು ಬಂದು ನೀರು ಕುಡಿದು ಹೋಗುತ್ತಿದ್ದವು. ಕಳೆದ ವರ್ಷ ಹುಲಿಗಳೂ ನೀರು ಕುಡಿದದ್ದನ್ನು ನೋಡಿದ್ದೇನೆ. ಅನೇಕ ಮೊಲಗಳು ನಮ್ಮ ತೋಟದಲ್ಲಿಯೇ ಬೀಡು ಬಿಟ್ಟಿವೆ. ನೀರು ಕುಡಿದು ನಮ್ಮ ತೋಟದ ಉತ್ಪನ್ನಗಳನ್ನು ಅವು ತಿಂದು ಹೋಗುತ್ತಿವೆ. ಆದರೆ, ಅವುಗಳ ಜತೆಗೇ ಜೀವಿಸುವುದು ನಮಗೆ ಅನಿವಾರ್ಯ’ ಎನ್ನುತ್ತಾರೆ ಅವರು.