ಉತ್ಲಿಗಾಂ: ಎರಡು ವರ್ಷಗಳ ಹಿಂದೆ ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಕಲ್ಲು ತೂರಾಟ ನಡೆಸುವವರಿಂದ ರಕ್ಷಣೆ ಪಡೆಯಲು ಸೈನಿಕರು ‘ಮಾನವ ಗುರಾಣಿ‘ಯಾಗಿ ಬಳಸಿಕೊಂಡಿದ್ದ ಫಾರೂಕ್ ಅಹಮ್ಮದ್ ದಾರ್ ಈ ಬಾರಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
’ಆರೋಗ್ಯ ಇಲಾಖೆಯಲ್ಲಿ ದಿನಗೂಲಿ ಆಧಾರದಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿರುವ ಫಾರೂಕ್ ಅವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ‘ ಎಂದು ಬುಡ್ಗಾಂನ ಮುಖ್ಯ ವೈದ್ಯಾಧಿಕಾರಿ ನಾಜಿರ್ ಅಹಮ್ಮದ್ ಹೇಳಿದ್ದಾರೆ.
20017ರಲ್ಲಿ ಫಾರೂಕ್ ಅವರನ್ನು ಯೋಧರು ಜೀಪ್ನ ಮುಂಭಾಗಕ್ಕೆ ಕಟ್ಟಿರುವ ಚಿತ್ರ ದೇಶದ ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಗೊಂಡಿತ್ತು. ಸೈನಿಕರ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.