ಪ್ರತಿಭಟನಕಾರರು ಸೌರಾ ಪ್ರದೇಶದಿಂದ ಶ್ರೀನಗರದ ಕೇಂದ್ರ ಭಾಗದತ್ತ ಮೆರವಣಿಗೆ ನಡೆಸಲು ಮುಂದಾದರು. ಆಗ ಅವರನ್ನುಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಷೆಲ್ ಸಿಡಿಸಿದರು. ಪೆಲೆಟ್ ಗುಂಡುಗಳನ್ನು ಹಾರಿಸಿದರು. ಆದರೆ ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಸಿದ್ಧವಾಗಿ ಬಂದಿದ್ದರು.ಜನರು ದೊಡ್ಡ ತಪ್ಪಲೆ, ಎಣ್ಣೆಯ ಕ್ಯಾನ್, ತಗಡುಗಳನ್ನು ಗುರಾಣಿಯಂತೆ ಬಳಸಿಕೊಂಡರು ಎಂದು ವರದಿಯಲ್ಲಿ ವಿವರಿಸಲಾಗಿದೆ.