ಜೈಪುರ (ಪಿಟಿಐ): ಶ್ರೀರಾಮನ ಮಗ ಕುಶನ ವಂಶಸ್ಥೆ ತಾವು ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿದ್ದಾರೆ. ದಿಯಾ ಅವರು ಜೈಪುರ ರಾಜ ಕುಟುಂಬದವರು. ‘ರಘುವಂಶಕ್ಕೆ ಸೇರಿದ ಯಾರಾದರೂ ಅಯೋಧ್ಯೆಯಲ್ಲಿ ಈಗ ನೆಲೆಸಿದ್ದಾರೆಯೇ’ ಎಂದು ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ಪೀಠವು ಶುಕ್ರವಾರ ಪ್ರಶ್ನಿಸಿತ್ತು.