ಬೆಂಗಳೂರು ವಿಮಾನನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಮೆರವಣಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಸಾದಹಳ್ಳಿ ಗೇಟ್ನಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನನ್ನ ಕುಟುಂಬ ಮಾತ್ರವಲ್ಲ, 100ಕ್ಕೂ ಅಧಿಕ ಸ್ನೇಹಿತರು, ಬಂಧುಗಳಿಗೆ ನೀಡಿದ ಕಿರುಕುಳವನ್ನು ಮರೆಯಲು ಸಾಧ್ಯವಿಲ್ಲ, ನನಗೆ ಆಗಿರುವ ಕಿರುಕುಳವನ್ನು ನಿಮಗೇ ಆದ ಕಿರುಕುಳ ಎಂಬಂತೆ ನೀವು ಭಾವಿಸಿ ನನ್ನನ್ನು ಕಂಡಿದ್ದೀರಿ, ನಿಮ್ಮ ಋಣವನ್ನು ಮರೆಯಲು ಸಾಧ್ಯವಿಲ್ಲ’ ಎಂದರು.