‘ವರದಿಯು ಏಕಪಕ್ಷೀಯವಾದಂತಿದೆ ಹಾಗೂ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಬೆಂಬಲಿಗರು ನಡೆಸಿದ ವಿದ್ವಂಸಕ ಕೃತ್ಯಗಳನ್ನಷ್ಟೇ ಪ್ರಸಾರ ಮಾಡಲಾಗಿದೆ. ಆರ್ಎಸ್ಎಸ್ ಅನ್ನು ಪ್ರಶ್ನಿಸುವ ವರದಿಯು ದೆಹಲಿ ಪೊಲೀಸರ ವಿರುದ್ಧವೂ ಆರೋಪಗಳನ್ನು ಮಾಡಿದೆ. ಆರ್ಎಸ್ಎಸ್ ಹಾಗೂ ದೆಹಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ಚಾನೆಲ್ ವಿಮರ್ಶಿಸಿದೆ’ ಎಂದು ಚಾನೆಲ್ಗಳಿಗೆ ಸಚಿವಾಲಯ ನೀಡಿದ್ದ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.