ಕೊಲ್ಲಂ ಜಿಲ್ಲಾಧಿಕಾರಿ ಬಿ. ಅಬ್ದುಲ್ ನಾಸರ್ ಈ ವಿಷಯವನ್ನು ಕೇರಳ ಸರ್ಕಾರದ ಗಮನಕ್ಕೆ ತಂದಿದ್ದು, ಮಿಶ್ರಾ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.ಯಾವುದೇ ಅಧಿಕಾರಿಗಳಿಗೆ ವಿಷಯ ತಿಳಿಸದೆ, ಅನುಮತಿಪಡೆಯದೆ ಮಿಶ್ರಾ ಹೊರಗೆ ಹೋಗಿದ್ದಾರೆ. ಕ್ವಾರೆಂಟೈನ್ನಲ್ಲಿರುವಾಗ ಈ ರೀತಿ ನಿಯಮ ಉಲ್ಲಂಘಿಸುವುದು ಅಪರಾಧ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದರು.