ಈ ಪ್ರಾಂತದಲ್ಲಿ ಹಿಡಿತ ಹೊಂದಿದ್ದ ನಿತಿನ್ ಗಡ್ಕರಿ, ರಾಜ್ಯ ಸಚಿವರಾದ ಚಂದ್ರಶೇಖರ್ ಭಾವನಕುಲೆ, ಸುಧೀರ್ ಮುನಗಂಟೀವರ್ ಅವರನ್ನು ಕಡೆಗಣಿಸಲಾಗಿದೆ. ಹೀಗಾಗಿಯೇ ಪಕ್ಷಕ್ಕೆ ಇಲ್ಲಿ ಹಿನ್ನಡೆ ಆಗಿದೆ. ಈ ಪ್ರಾಂತದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿಯ ಸ್ಥಳೀಯ ನಾಯಕರು ಮತಗಟ್ಟೆ ಮಟ್ಟದಲ್ಲಿ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಇದೂ ಸಹ ಬಿಜೆಪಿಯ ಹಿನ್ನಡೆಗೆ ಕಾರಣ ಎಂದು ಬಿಜೆಪಿ ಮೂಲಗಳು ಅಭಿಪ್ರಾಯಪಟ್ಟಿವೆ.