ರ್ಯಾಲಿ ಆರಂಭವಾಗುವ ಮುನ್ನ ಪ್ರಭಾದೇವಿಯಲ್ಲಿರುವ ಸಿದ್ದಿವಿನಾಯಕ ದೇವಾಲಯಕ್ಕ ಭೇಟಿ ನೀಡಿದ ಠಾಕ್ರೆಅಲ್ಲಿಂದ ಜಿಮ್ಖಾನ್ ಬಂದಿದ್ದಾರೆ. ರ್ಯಾಲಿಯಲ್ಲಿ ಭಾಗವಹಿಸುವುದಕ್ಕಾಗಿ ಸಾವಿರಾರು ಎಂಎನ್ಎಸ್ ಕಾರ್ಯಕರ್ತರು 11 ಗಂಟೆಗೆ ಜಿಮ್ಖಾನಾದಲ್ಲಿ ಜಮಾಯಿಸಿದ್ದರು. ಕಲ್ಯಾಣ್, ಥಾಣೆ, ಪುಣೆ ಮತ್ತು ನಾಶಿಕ್ನಿಂದಲೂ ಕಾರ್ಯಕರ್ತರು ಬಂದು ಸೇರಿದ್ದರು. ಜಿಮ್ಖಾನಾದಿಂದ ಹೊರಟ ಈ ರ್ಯಾಲಿ ಆಜಾದ್ ಮೈದಾನದಲ್ಲಿ ಕೊನೆಗೊಳ್ಳಲಿದೆ.