‘ಬ್ಯಾಗ್ ವಶಕ್ಕೆ ಪಡೆದು ಪಂಚನಾಮೆ ನಡೆಸಲಾಯಿತು. ಅದರಲ್ಲಿ 4–5 ತೊಲೆ ಚಿನ್ನಾಭರಣ, ಬಟ್ಟೆ ಮತ್ತು ಮೂರು ಎಟಿಎಂ ಕಾರ್ಡ್ಗಳಿದ್ದವು. ವಿಳಾಸ ದಾಖಲಾತಿ ಇರಲಿಲ್ಲ. ಎಟಿಎಂ ಕಾರ್ಡ್ ತೆಗೆದುಕೊಂಡು ಬ್ಯಾಂಕ್ಗೆ ಹೋಗಿ ವಾರಸುದಾರರ ಮೊಬೈಲ್ ಸಂಖ್ಯೆ ಪಡೆದೆವು. ಆ ಬಳಿಕ ಕರೆ ಮಾಡಿ ಅವರನ್ನು ಕರೆಸಿಕೊಂಡೆವು’ ಎಂದು ಆರ್ಪಿಎಫ್ ಸಿಬ್ಬಂದಿ ರವಿಕುಮಾರ ಜಿ.ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.