ಗಾಲ್ವನ್ ಕಣಿವೆ ಪ್ರದೇಶದಲ್ಲಿ ಸೋಮವಾರ ರಾತ್ರಿ ಭಾರತ–ಚೀನಾ ಸೇನಾಪಡೆಗಳ ನಡುವೆ ನಡೆದಿದ್ದ ಸಂಘರ್ಷದಲ್ಲಿ ಭಾರತದ ಒಬ್ಬ ಸೇನಾಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಗಾಲ್ವನ್ ಕಣಿವೆ ಮೇಲಿನ ಸಾರ್ವಭೌಮತೆಯನ್ನು ಚೀನಾ ಪ್ರತಿಪಾದಿಸಿತ್ತು. ಗಾಲ್ವನ್ ಕಣಿವೆ ವಿಷಯವಾಗಿ ನಾವು ಸೇನೆ ಹಾಗೂ ರಾಜತಾಂತ್ರಿಕ ಮಾರ್ಗದಲ್ಲಿ ಮಾತುಕತೆ ನಡೆಸುತ್ತಿದ್ದೇವೆ. ಘಟನೆ ನಡೆದಿರುವುದು ಚೀನಾಕ್ಕೆ ಸೇರಿದ ಜಾಗದಲ್ಲಿ. ಇದಕ್ಕಾಗಿ ಚೀನಾವನ್ನು ದೂಷಿಸಬೇಕಾಗಿಲ್ಲ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೊ ಲಿಜಿಯಾನ್ ಹೇಳಿದ್ದರು.