ನವದೆಹಲಿ: ಎಎನ್–32 ವಿಮಾನ ದುರಂತದಲ್ಲಿ ಹುತಾತ್ಮರಾದ 13 ವಾಯುಪಡೆ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಗೌರವ ಸಮರ್ಪಿಸಿದರು.
ಇಲ್ಲಿನ ಪಾಲಂ ತಾಂತ್ರಿಕ ಪ್ರದೇಶದಲ್ಲಿ ಯೋಧರ ಕುಟುಂಬದವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
Palam Airport, Delhi: Defence Minister Rajnath Singh pays homage to the 13 personnel who lost their life in IAF An-32 crash in Arunachal Pradesh. The plane had gone missing on June 3. pic.twitter.com/RRtBf1U7tU
‘ಎಎನ್–21 ವಿಮಾನ ದುರಂತದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದೆ.ಯೋಧರನ್ನು ಕಳೆದುಕೊಂಡಿದ್ದು, ದೇಶಕ್ಕೆ ಭರಿಸಲಾಗದ ನಷ್ಟವಾಗಿದೆ. ಅವರ ಕುಟುಂಬದವರನೋವಿನಲ್ಲಿ ಜೊತೆಯಾಗಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ಜೂನ್ 3ರಂದು ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ವಿಮಾನ ಕಾಣೆಯಾಗಿತ್ತು. 11ರಂದು ದುರಂತ ಸ್ಥಳವನ್ನು ಪತ್ತೆ ಮಾಡಲಾಗಿತ್ತು. ಪ್ರತಿಕೂಲ ಹವಾಮಾನದ ಕಾರಣ ಮೃತರ ಶವಗಳನ್ನು ಸಾಗಿಸಲು ತೊಂದರೆಯಾಗಿತ್ತು. ಗುರುವಾರ ಅಸ್ಸಾಂನ ಜೊಹ್ರಾತ್ ವಾಯುಪಡೆ ನಿಲ್ದಾಣದ ಮೂಲಕ ದೆಹಲಿ ತರಲಾಗಿತ್ತು.