‘ಇದು ಸಹಿ ಅಭಿಯಾನದ ಹೆಸರಿನಲ್ಲಿ ಚುನಾವಣಾ ಪ್ರಚಾರ ನಡೆಸುವ ಕಾಂಗ್ರೆಸ್ನ ತಂತ್ರ’ ಎಂದು ಬಣ್ಣಿಸಿದ ಜೇಟ್ಲಿ, ‘ಇಂಥ ಮನವಿ ಪತ್ರಗಳಿಗೆ ಸಹಿ ಹಾಕಲು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಾಕಷ್ಟು ಜನರು ಸಿದ್ಧರಿರುತ್ತಾರೆ. ಶೈಕ್ಷಣಿಕ ಕ್ಷೇತ್ರದಲ್ಲಿರುವವರು, ಅರ್ಥಶಾಸ್ತ್ರಜ್ಞರು, ಕಲಾವಿದರು, ಮಾಜಿ ಅಧಿಕಾರಿಗಳು ಮಾತ್ರವಲ್ಲ ಈಗ ಕೆಲವು ಮಾಜಿ ಸೈನಿಕರೂ ಇಂಥ ಮನವಿಗಳಿಗೆ ಸಹಿ ಹಾಕುತ್ತಿದ್ದಾರೆ. ಇನ್ನೂ ಕೆಲವರ ಅನುಮತಿಯನ್ನು ಪಡೆಯದೆಯೇ ಹೆಸರು ಹಾಕಿ ಸಹಿ ಮಾಡಲಾಗುತ್ತಿದೆ’ ಎಂದು ಜೇಟ್ಲಿ ಆರೋಪಿಸಿದರು.