‘ಪ್ರದರ್ಶನ ನೀಡಲು ವೇದಿಕೆ ತೆರಳಿದ ಮಂಜುನಾಥ್, ತಮ್ಮ ಕಥೆಗಳ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು. ತಮ್ಮ ತಂದೆ ಮತ್ತು ಕುಟುಂಬದ ಬಗ್ಗೆ ಮಾತನಾಡುತ್ತಿದ್ದರು. ಬಳಿಕ ತಾನು ಹೇಗೆ ಉದ್ವೇಗದಿಂದ ಬಳಲುತ್ತಿದ್ದೇನೆ ಎಂದು ಕಥೆ ಹೇಳುತ್ತಿದ್ದರು.ಕ್ಷಣಮಾತ್ರದಲ್ಲಿ ಕುಸಿದು ಬಿದ್ದರು. ಆದರೆ, ಜನರು ಇದನ್ನು ಪ್ರದರ್ಶನದ ಭಾಗವಾಗಿರಬೇಕು ಎಂದು ಭಾವಿಸಿದ್ದರು’ ಎಂದು ಸಹನಟ ಹಾಗೂ ಸ್ನೇಹಿತ ಮಿಕ್ದಾದ್ ದೋಹವಾಲಾ ವಿವರಿಸಿದ್ದಾರೆ.