ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ: ವೇದಿಕೆಯಲ್ಲಿಯೇ ಮೃತಪಟ್ಟ ಭಾರತೀಯ ಹಾಸ್ಯ ಕಲಾವಿದ

Last Updated 21 ಜುಲೈ 2019, 19:30 IST
ಅಕ್ಷರ ಗಾತ್ರ

ದುಬೈ : ದುಬೈನಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಸಂದರ್ಭದಲ್ಲಿಯೇ ಭಾರತದ ಸ್ಟ್ಯಾಂಡ್‌–ಅಪ್‌ ಕಾಮಿಡಿಯನ್‌ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಂಜುನಾಥ ನಾಯ್ಡು (36) ಮೃತಪಟ್ಟವರು.ಅಬುದಾಬಿಯಲ್ಲಿ ಜನಿಸಿದ ನಾಯ್ಡು, ನಂತರ ದುಬೈಗೆ ಸ್ಥಳಾಂತರಗೊಂಡಿದ್ದರು.

‘ಪ್ರದರ್ಶನ ನೀಡಲು ವೇದಿಕೆ ತೆರಳಿದ ಮಂಜುನಾಥ್‌, ತಮ್ಮ ಕಥೆಗಳ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು. ತಮ್ಮ ತಂದೆ ಮತ್ತು ಕುಟುಂಬದ ಬಗ್ಗೆ ಮಾತನಾಡುತ್ತಿದ್ದರು. ಬಳಿಕ ತಾನು ಹೇಗೆ ಉದ್ವೇಗದಿಂದ ಬಳಲುತ್ತಿದ್ದೇನೆ ಎಂದು ಕಥೆ ಹೇಳುತ್ತಿದ್ದರು.ಕ್ಷಣಮಾತ್ರದಲ್ಲಿ ಕುಸಿದು ಬಿದ್ದರು. ಆದರೆ, ಜನರು ಇದನ್ನು ಪ್ರದರ್ಶನದ ಭಾಗವಾಗಿರಬೇಕು ಎಂದು ಭಾವಿಸಿದ್ದರು’ ಎಂದು ಸಹನಟ ಹಾಗೂ ಸ್ನೇಹಿತ ಮಿಕ್ದಾದ್‌ ದೋಹವಾಲಾ ವಿವರಿಸಿದ್ದಾರೆ.

‘ಮಂಜುನಾಥ ಪೋಷಕರು ನಿಧನರಾಗಿದ್ದಾರೆ. ಅವರಿಗೆ ಒಬ್ಬ ಸಹೋದರನಿದ್ದಾನೆ. ಇದಕ್ಕಿಂತ ಹೆಚ್ಚಾಗಿ ಕಲೆ ಮತ್ತು ಕಾಮಿಡಿ ವಲಯವೇ ಅವರಿಗೆ ದೊಡ್ಡ ಕುಟುಂಬವಾಗಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT