ಧಾರವಾಡ: ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ, ಚುನಾವಣಾಧಿಕಾರಿಯಿಂದ ಪೂರ್ವಾನುಮತಿ ಪಡೆಯದೆ ತಮ್ಮ ವಾಹನಗಳ ಮೇಲೆ ಟಿಕೆಟ್ ಆಕಾಂಕ್ಷಿಗಳ ಹಾಗೂ ಪಕ್ಷದ ಪ್ರಚಾರ ಪೋಸ್ಟರ್ ಅಂಟಿಸಿದ್ದ ಎರಡು ಕಾರುಗಳನ್ನು ಉಪನಗರ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.‘ಕಾಂಗ್ರೆಸ್ ಅಭ್ಯರ್ಥಿ ಜನ ಸೇವಕ ನಮ್ಮ ನಾಯಕ ವಿನಯಣ್ಣ’ ಎಂಬ ಪೋಸ್ಟರ್ ಅಂಟಿಸಿದ್ದ ಹಾಗೂ ‘ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕಿತ್ತೂರು’ ಎಂದು ಗಾಜಿನ ಮೇಲೆ ಬರೆದಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.