ನವದೆಹಲಿ: ‘ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ನಂತರ ಉಭಯ ದೇಶಗಳು ರಚನಾತ್ಮಕ ಮಾತುಕತೆಯಲ್ಲಿ ತೊಡಗಬೇಕು. ಎರಡೂ ದೇಶಗಳ ನಡುವಿನ ವ್ಯಾಜ್ಯಗಳನ್ನು ಪರಿಹರಿಸುವ ಯತ್ನ ಮಾಡಿದಲ್ಲಿ ಶಾಂತಿ ಸ್ಥಾಪನೆ ಸಾಧ್ಯ’ ಎಂದು ನಿರ್ಗಮಿಸುತ್ತಿರುವ, ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನರ್ ಸೊಹೇಲ್ ಮಹಮೂದ್ ಹೇಳಿದ್ದಾರೆ.