ಕೆಫೆ ಕಾಫಿ ಡೇ ಸ್ಥಾಪಕ ವಿ. ಜಿ. ಸಿದ್ಧಾರ್ಥ ಅವರ ಸಾವಿಗೆ ಪ್ರತಿಕ್ರಿಯಿಸುತ್ತಿದ್ದ ಅವರು, ‘ಉದ್ದಿಮೆದಾರರು ವಹಿವಾಟಿನಲ್ಲಿ ವೈಫಲ್ಯ ಕಂಡರೆ ಗೌರವಾನ್ವಿತ ರೀತಿಯಲ್ಲಿ ಹೊರ ನಡೆಯಬೇಕು. ದಿವಾಳಿ ಸಂಹಿತೆಯಡಿ (ಐಬಿಸಿ) ಪರಿಹಾರ ಕಂಡುಕೊಳ್ಳಬೇಕು. ವಹಿವಾಟು ವೈಫಲ್ಯವು ಕಳಂಕವೇನೂ ಅಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.